ಮರೆಯದಿರಿ ನಮ್ಮತನ
ಅನುಕರಣೆಯ ಬೆಂಬಿದ್ದು ಪಾಶ್ಚಿಮಾತ್ಯ ಜೀವನ ಶೈಲಿ ಅಳವಡಿಸಿಕೊಂಡು ನಾವೆಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದೇವೆಂದು ಸೂಕ್ಷ್ಮವಾಗಿ ಅವಲೋಕಿಸಿದಾಗ ಅರ್ಥವಾಗುತ್ತದೆ.
ಅವರ ಉಡುಗೆ-ತೊಡುಗೆಯ ಅನುಕರಣೆಯಿಂದಾಗಿ ಅದೆಷ್ಟೋ ಸರಣಿ ಅತ್ಯಾಚಾರ ಪ್ರಕರಣಗಳು ಸೃಷ್ಟಿಯಾದವು . ಅವರ ಆಹಾರ ಪದ್ದತಿ ಅನುಸರಿಸಿ ಆರೋಗ್ಯವಂತರಾದ ನಾವು ಇಲ್ಲ ಸಲ್ಲದ ರೋಗಗಳನ್ನು ಬರಮಾಡಿಕೊಂಡೆವು. ವೈಭವದ ಜೀವನ, ಸುಖಲೋಲತೆಯ ದಾರಿ ಹಿಡಿದು ನಗರೀಕರಣದ ತೆಕ್ಕೆಯಲ್ಲಿ ಸಿಕ್ಕಿ ಹಾಕಿಕೊಂಡೆವು. ಇದರಿಂದ ಆರ್ಥಿಕ ಬೆಳವಣಿಗೆಯೇನೊ ಕಾಣಿಸಿತು, ಆದರೆ ಆನಂದಮಯ ಜೀವನಕ್ಕೆ ಬೇಕಾಗುವ ಶಾಂತಿ, ನೆಮ್ಮದಿ ಮತ್ತು ಪ್ರೀತಿಯನ್ನೇ ಕಳೆದುಕೊಂಡೆವು. ಮಕ್ಕಳ ಆರೈಕೆಯಲ್ಲಿ ಮೊಮ್ಮಕ್ಕಳನ್ನು ಆಡಿಸಿಕೊಂಡು ನೆಮ್ಮದಿಯಿಂದ ಕಾಲ ಕಳೆಯಬೇಕಿದ್ದ ವೃದ್ದ ಮಾತೃ-ಪಿತೃಗಳು ವೃದ್ದಾಶ್ರಮಗಳಲ್ಲಿ ಕಾಣತೊಡಗಿದರು. ನಾಯಿಕೊಡೆಯಂತೆ ಗಲ್ಲಿ ಗಲ್ಲಿಗೊಂದು ಶಿಶು ವಿಹಾರಗಳ ಸೃಷ್ಟಿಯಾಗಿ ತಂದೆ ತಾಯಿಗಳ ಪ್ರೀತಿ ಹೇಗಿರುತ್ತದೆ ಎಂಬುದನ್ನೇ ಮರೆಸಿದವು.
ಒಂದು ಕಾಲದಲ್ಲಿ ಜಗತ್ತೇ ಕತ್ತು ತಿರುಗಿಸಿ ನೋಡುವಂತೆ ಮಾಡಿದ ನಮ್ಮ ವಿಶಿಷ್ಟ ಸಂಸ್ಕೃತಿ ಮರೆತು ಅಂಧ ಅನುಕರಣೆ ಮಾಡಿ ನಮ್ಮತನವನ್ನೇ ಕಳೆದುಕೊಂಡು ನಮ್ಮನ್ನು ನಾವೇ ಸಮಸ್ಯಾ ಕೂಪಕ್ಕೆ ತಳ್ಳುತ್ತಿದ್ದೇವೆ. ಆದ್ದರಿಂದಲೇ ಹಿರಿಯರು ಹೇಳಿದ್ದಾರೆ ಬೆಳ್ಳಗಿರುವುದೆಲ್ಲಾ ಹಾಲಲ್ಲ ಅಂತ.
ಅನುಕರಣೆಯ ಬೆಂಬಿದ್ದು ಪಾಶ್ಚಿಮಾತ್ಯ ಜೀವನ ಶೈಲಿ ಅಳವಡಿಸಿಕೊಂಡು ನಾವೆಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದೇವೆಂದು ಸೂಕ್ಷ್ಮವಾಗಿ ಅವಲೋಕಿಸಿದಾಗ ಅರ್ಥವಾಗುತ್ತದೆ.
ಅವರ ಉಡುಗೆ-ತೊಡುಗೆಯ ಅನುಕರಣೆಯಿಂದಾಗಿ ಅದೆಷ್ಟೋ ಸರಣಿ ಅತ್ಯಾಚಾರ ಪ್ರಕರಣಗಳು ಸೃಷ್ಟಿಯಾದವು . ಅವರ ಆಹಾರ ಪದ್ದತಿ ಅನುಸರಿಸಿ ಆರೋಗ್ಯವಂತರಾದ ನಾವು ಇಲ್ಲ ಸಲ್ಲದ ರೋಗಗಳನ್ನು ಬರಮಾಡಿಕೊಂಡೆವು. ವೈಭವದ ಜೀವನ, ಸುಖಲೋಲತೆಯ ದಾರಿ ಹಿಡಿದು ನಗರೀಕರಣದ ತೆಕ್ಕೆಯಲ್ಲಿ ಸಿಕ್ಕಿ ಹಾಕಿಕೊಂಡೆವು. ಇದರಿಂದ ಆರ್ಥಿಕ ಬೆಳವಣಿಗೆಯೇನೊ ಕಾಣಿಸಿತು, ಆದರೆ ಆನಂದಮಯ ಜೀವನಕ್ಕೆ ಬೇಕಾಗುವ ಶಾಂತಿ, ನೆಮ್ಮದಿ ಮತ್ತು ಪ್ರೀತಿಯನ್ನೇ ಕಳೆದುಕೊಂಡೆವು. ಮಕ್ಕಳ ಆರೈಕೆಯಲ್ಲಿ ಮೊಮ್ಮಕ್ಕಳನ್ನು ಆಡಿಸಿಕೊಂಡು ನೆಮ್ಮದಿಯಿಂದ ಕಾಲ ಕಳೆಯಬೇಕಿದ್ದ ವೃದ್ದ ಮಾತೃ-ಪಿತೃಗಳು ವೃದ್ದಾಶ್ರಮಗಳಲ್ಲಿ ಕಾಣತೊಡಗಿದರು. ನಾಯಿಕೊಡೆಯಂತೆ ಗಲ್ಲಿ ಗಲ್ಲಿಗೊಂದು ಶಿಶು ವಿಹಾರಗಳ ಸೃಷ್ಟಿಯಾಗಿ ತಂದೆ ತಾಯಿಗಳ ಪ್ರೀತಿ ಹೇಗಿರುತ್ತದೆ ಎಂಬುದನ್ನೇ ಮರೆಸಿದವು.
ಒಂದು ಕಾಲದಲ್ಲಿ ಜಗತ್ತೇ ಕತ್ತು ತಿರುಗಿಸಿ ನೋಡುವಂತೆ ಮಾಡಿದ ನಮ್ಮ ವಿಶಿಷ್ಟ ಸಂಸ್ಕೃತಿ ಮರೆತು ಅಂಧ ಅನುಕರಣೆ ಮಾಡಿ ನಮ್ಮತನವನ್ನೇ ಕಳೆದುಕೊಂಡು ನಮ್ಮನ್ನು ನಾವೇ ಸಮಸ್ಯಾ ಕೂಪಕ್ಕೆ ತಳ್ಳುತ್ತಿದ್ದೇವೆ. ಆದ್ದರಿಂದಲೇ ಹಿರಿಯರು ಹೇಳಿದ್ದಾರೆ ಬೆಳ್ಳಗಿರುವುದೆಲ್ಲಾ ಹಾಲಲ್ಲ ಅಂತ.
No comments:
Post a Comment