Thursday, June 12, 2014

ಓ ಹಾಡು ನಿನ್ನಿಂದ ಈ ಪಾಡು...!

                                                   published 15th may 2014 in sakhi magzine

   
    ಅವು ಚುನಾವಣಾ ದಿನಗಳು, ಅಬ್ಬರದ ಸಮಾವೇಶಗಳು, ಒಬ್ಬರು ಇನ್ನೊಬ್ಬರಿಗೆ ಬಯ್ಯುವುದು, ಹೀಯಾಳಿಸುವುದು, ಬಣ್ಣ ಬಣ್ಣದ ಮಾತುಗಳನ್ನಾಡುತ್ತಾ ಜನರನ್ನು ಫುಸಲಾಯಿಸಲು ನಾನಾ ರೂಪ ಧರಿಸುವ ರಾಜಕಾರಣಿಗಳು. ಎಲ್ಲಿ ಹೋದರೂ ಚುನಾನಣೆಯ ಮಾತುಗಳೇ ಕೇಳುತ್ತಾ ತಲೆ ಚಿಟ್ಟು  ಹಿಡಿದಿತ್ತು ಇದರಿಂದ ತಪ್ಪಿಸಿಕೊಳ್ಳಲೆಂದು ಊರಿಗೆ ಹೋಗಿದ್ದೆ. ಅದು ಸಾಯಂಕಾಲದ ವೇಳೆ ಮನೆಯಲ್ಲಿದ್ದವರೆಲ್ಲಾ ಮದುವೆಗೆಂದು ನೆಂಟರಲ್ಲಿಗೆ ಹೋಗಿದ್ದಾರೆ. ದಿನಾಲು ಗೆಳೆಯರ ಜೊತೆ ಇರುತ್ತಿದ್ದ ನಾನು ಅಂದು ಏಕಾಂಗಿಯಾಗಿ ಬಂಧಿಸಲ್ಪಟ್ಟ ಕೈದಿಯಂತಾದೆ. ಆ ಸ್ಥಿತಿಯಲ್ಲಿ ಉಪವಾಸವಿದ್ದರೂ ಚಿಂತೆಯಿಲ್ಲ ಒಬ್ಬಂಟಿಗನಾಗಿರಬಾರದು ಎನಿಸುತ್ತಿತ್ತು.
  ಪ್ರತಿದಿನ ಚಿಕ್ಕ ಚಿಕ್ಕ ಮಕ್ಕಳಿಂದ ತುಂಬಿ ಗಿಜಗಿಡುತ್ತಿದ್ದ ಮನೆ ಮುಂದಿನ ಕಟ್ಟೆ ಯಾರಿಲ್ಲದೇ ಬೀಕೊ ಎನ್ನುತಿತ್ತು, ಯಾವ ಗೆಳೆಯರ ಪತ್ತೆಯೂ ಇಲ್ಲ. ಅನ್ಯ ಮಾರ್ಗವಿಲ್ಲದೆ ಟಿ.ವಿ.ಮುಂದೆ ಕುಳಿತುಕೊಳ್ಳಲೇ ಬೇಕಾಯಿತು. ಯಾವ ಸುದ್ದಿ ವಾಹಿನಿ ತೆಗೆದರೂ ರಾರಾಜಿಸುವ ರಾಜಕೀಯ ಸುದ್ದಿಗಳು, ಬೇಸರವಾಗಿ, ಸಂಗೀತದ ಗಾಳಿ ಗಂಧವೂ ತಿಳಿಯದಿದ್ದರೂ ಸಿನೆಮಾ ಹಾಡುಗಳೆಂದರೆ ಪ್ರಾಣವೆಂಬಂತೆ ಆಲಿಸುವ ನಾನು ಯು2 ಚಾನಲ್‍ನ ಸಂಖ್ಯೆಯನ್ನು ಅದುಮಿದ್ದೇ ತಡ ಒಂದಕ್ಕಿಂತ ಒಂದು ಭಿನ್ನವಾದ ಹಾಡುಗಳು.
  ಪರದೆಯಲ್ಲಿನ ನಟನಿಗೆ ಅನುಸರಿಸುತ್ತಾ ಅವನಿಗಿಂತ ಜೋರಾಗಿ ಹಾಡತೊಡಗಿದೆ. ಕೈಕಾಲುಗಳು ತಾನಾಗಿಯೆ ಕುಣಿಯಲು ಆರಂಭಿಸಿದವು. ಉತ್ತಮ ಕೆಲಸಕ್ಕೆ ಹಲವಾರು ವಿಘ್ನಗಳು ಎಂಬಂತೆ ಇದ್ದಕಿದ್ದಂತೆ ಕರೆಂಟ್ ಕಟ್ಟಾಗಿ ಟಿ.ವಿ ಹಾಡುವುದನ್ನು ನಿಲ್ಲಿಸಿತು, ನನ್ನ ಹಾಡು ಮಾತ್ರ ನಡೆಯುತ್ತಲೇ  ಇತ್ತು. ಆ ಹಾಡುಗಳಲ್ಲಿ ಮಗ್ನನಾದ ನಾನು ಕರ್ಕಶ ದ್ವನಿಯಲ್ಲಿ ಗಟ್ಟಿಯಾಗಿ “ಯಾರೊ ಈ ಭೂಮಿಗೆ ಪ್ರೀತಿಯಾ ತಂದರು” ಎಂದು ಅರಚುತ್ತಾ ಮನೆ ಮುಂದಿರುವ ರಸ್ಥೆಗೆ ಬಂದು ಬಿಟ್ಟೆ. ಸಮಯ ಕಳೆದಂತೆಲ್ಲ ವ್ಯಾಲ್ಯೂಮ್ ಹೆಚ್ಚುತ್ತಲೇ ಇತ್ತು. ನನ್ನದೇ ಲೋಕದಲ್ಲಿ ತೇಲಾಡುತ್ತಿರುವಾಗ ಕಣ್ಮುಂದೆ ಏನೋ ಹಾದು ಹೋದಂತಾಗಿ ಎಚ್ಚರಗೊಂಡು ಕಣ್ಬಿಟ್ಟು ಕತ್ತು ತಿರುಗಿಸಿ ಅತ್ತಿತ್ತ ನೋಡಿದಾಗ ಓಣಿಯ ಮಹಿಳೆಯರೆಲ್ಲರೂ ಸುತ್ತುರಿದು ನಿಂತಿದ್ದಾರೆ. ಪ್ರತಿಯೊಂದು ಮುಖವು ಮುಸು ಮುಸು ನಗು ಸೂಸುತ್ತಿದೆ.
    ವಾವ್..! ನನ್ನ ಹಾಡಿಗೂ ಅಭಿಮಾನಿಗಳಾ? ಅಂದು ಕೊಚ್ಚಿಕೊಳ್ಳುವ ಹಾಗಿರಲಿಲ್ಲ. ಯಾಕೆ  ಇಷ್ಟೊಂದು ಜನ ಸೇರಿದ್ದೀರಿ ಅಂದು ಪ್ರಶ್ನಿಸುವ ಹಾಗೂ ಇರಲಿಲ್ಲ. ಅಲ್ಲಿಯವರೆಗೂ ನನ್ನ ಕಂಠದಿಂದ ಹೊರಬಂದ ಜೋರಾದ ದ್ವನಿ ಎಂದೂ ಕೇಳಿರಲಿಲ್ಲ. ಕಠೋರವಾದ ದ್ವನಿ ಕಿವಿಗೆ ಬಿದ್ದೊಡನೆ ಎಲ್ಲಿ ಏನಾಯಿತೊ ಎಂದುಕೊಂಡು ನಾನಿದ್ದಲ್ಲಿಗೆ ಧಾವಿಸಿದರಂತೆ. ನಗುವವರ ಮುಂದೆ ಹಲ್ಲು ಕಿರಿದು ನಾಲಿಗೆ ಕಚ್ಚಿ ಮುಖ ಅವುಚಿಕೊಳ್ಳದೆ ಬೇರೆ ದಾರಿಯೇ ಇರಲಿಲ್ಲ. ಹಾಡುವುದು ನನ್ನಿಷ್ಟ, ಮನಬಂದಂತೆ ಹಾಡುತ್ತೇನೆ ಅಂದುಕೊಳ್ಳುವುದು ತಪ್ಪೆಂದು ಎನಿಸತೊಡಗಿತು. ಎಲ್ಲಾದರೂ ಹಾಡು ಕೇಳಿ ಅದನ್ನು ಗುನುಗುವಾಗಲೆಲ್ಲ ಈ ಘಟನೆ ನೆನಪಾಗಿ ನಗು ಉಕ್ಕುತ್ತದೆ.

Wednesday, January 22, 2014


ಡಬ್ಬಿಂಗ್ ಭೂತ ಇನ್ನೆಷ್ಟು ದಿನ ?

ಮೊಂಡು ವಾದ ಬಿಟ್ಟು ಕನ್ನಡಿಗರಿಗೆ ಏನು ಬೇಕು ಕೇಳುವಿರಾ?

    ಡಬ್ಬಿಂಗ್ ಬಗ್ಗೆ ಎದ್ದಿರುವ ಗೊಂದಲದಿಂದ ಜನತೆ ತುಂಬಾ ಬೇಸರಗೊಂಡಿದ್ದಾರೆ ಹಲವಾರು ವರ್ಷಗಳಿಂದ ನಡೆಯುತ್ತಿರುವ ಈ ವಿವಾದಕ್ಕೆ ತೆರೆ ಕಾಣುವ ಯಾವುದೇ ¯ಕ್ಷಣಗಳು ಕಾಣುತ್ತಿಲ್ಲ. ಡಬ್ಬಿಂಗ್ ಬೇಡವೇ ಬೇಡ ಇದರಿಂದ ಕನ್ನಡ ಭಾಷೆ ಮತ್ತು ಚಿತ್ರರಂಗಕ್ಕೆ ದೊಡ್ಡ ಅಘಾತ ಉಂಟಾಗುತ್ತದೆ ಎಂದು ಹೇಳಿಕೊಂಡು ಡಬ್ಬಿಂಗ್ ವಿರೋಧಿಸುವವರು ನಿಜವಾಗಲೂ ಕನ್ನಡ ಬೆಳೆಸುವ ಮನೋಭಾವನೆ ಉಳ್ಳವರಾಗಿದ್ದರೆ ಇಂತಹ ಮೊಂಡು ವಾದಕ್ಕೆ ಪಟ್ಟು ಹಿಡಿಯುತ್ತಿರಲಿಲ್ಲ. ಇಲ್ಲಿ ಆಗುವ ನಷ್ಟ ಕನ್ನಡಿಗರಿಗೋ ಅಥವ ನಿರ್ಮಾಪಕರಿಗೋ ತಿಳಿಯುತ್ತಿಲ್ಲ. ಊಟ ಮಾಡಬೇಕೆಂದು ಕುಳಿತ ವ್ಯಕ್ತಿ ಯಾವುದು ರುಚಿಕಟ್ಟಾಗಿರುವುದೋ ಅದನ್ನು ಮಾತ್ರ ಸ್ವೀಕರಿಸುವುದು ಸ್ವಭಾವ ಅದು ಆತನ ಹಕ್ಕು ಕೂಡ. ಯಾರು ವಿರೋಧಿಸುವ ಪ್ರಸಂಗ ಬಾರದು ಆದರೆ ಒಂದು ಅರ್ಥ ಆಗುತ್ತಿಲ್ಲ ಒತ್ತಾಯ ಪೂರ್ವಕವಾಗಿ ನಾವು ಮಾಡಿದ್ದನೇ ಸ್ವೀಕರಿಸಿ ಎಂದು ಒಪ್ಪಿಸಲು ಪ್ರಯತ್ನಿಸುತ್ತಿರುವಂತಿದೆ ಇವರ ಲೆಕ್ಕಾಚಾರ. ಚಲನಚಿತ್ರಗಳಿರುವುದು ಮನೋರಂಜನೆಗಾಗಿ ನೋಡುಗ ಇಲ್ಲಿ ದುಡ್ಡು ವ್ಯಯ ಮಾಡುವುದರಿಂದ ಹೆಚ್ಚು ಚೆನ್ನಾಗಿರುವುದನ್ನು ನೋಡಬೇಕೆಂಬ ಹಂಬಲವುಳ್ಳವನಾಗಿರುತ್ತಾನೆ ಇಲ್ಲಿ ಅವನಿಗೆ ಒತ್ತಾಯ ಮಾಡಿದರೆ ಅದು ಮೂಲಭೂತ ಹಕ್ಕಿಗೆ ವಿರೋಧಿಸಿದಂತೆಯೇ ಸರಿ. ಕನ್ನಡ ಚಿತ್ರಗಳನ್ನು ಕನ್ನಡಿಗರೇ ಹೆಚ್ಚಾಗಿ ನೋಡಬೇಕು ಎಂದು ಬಯಸುವ ನೀವು ಈ ವೀಕ್ಷಕರÀ ಭಾವನೆಗಳಿಗೆ ಕಿಂಚಿತ್ತಾದರೂ ಬೆಲೆ ಬೇಡವೇ?
ಇಲ್ಲಿ ನಿಮ್ಮಷ್ಟಕ್ಕೆ ನೀವು ನಿರ್ಧಾರ ತೆಗೆದುಕೊಂಡರೆ ಇದು ನಿರಂಕುಶತ್ವದ ಪರಮಾವಧಿ ಎನ್ನದೆ ಮತ್ತೇನು ಅಲ್ಲ. 

  ಒಂದು ದಿನ ಎಂಟು ವರ್ಷದ ಹುಡುಗ ಸ್ಪೈಡರ್ ಮ್ಯಾನ್ ಚಿತ್ರ ವೀಕ್ಷಿಸುತ್ತಾ ಕುಳಿತಿದ್ದ ನನಗೆ ಆಶ್ಚರ್ಯವೋ ಆಶ್ವರ್ಯ ಏಕೆಂದರೆ ಅವನಿಗೆ ಇಂಗ್ಲಿಷ್ ಭಾಷೆಯ ಜ್ಞಾನವೇ ಇಲ್ಲ ಕುತೂಹಲದಿಂದ ಕನ್ನಡವನ್ನು ಬಿಟ್ಟು ಅರ್ಥವಾಗದ ಇಂಗ್ಲಿಷ್ ಚಿತ್ರ ಯಾಕ್ಷೆ ವೀಕ್ಷಿಸುತ್ತಿದ್ದೀಯಾ ಎಂದು ಕೇಳಿದರೆ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳೆಲ್ಲರು ಅದರ ಬಗ್ಗೆ ಮಾತಾಡುತ್ತಿದ್ದರು ತುಂಬಾ ಚನ್ನಾಗಿದೆಯಂತೆ ಅದಕ್ಕೆ ನೋಡ್ತಾ ಇದೀನಿ ಎಂದ. ಎಷ್ಟು ಬೇಸರದ ಸಂಗತಿ ಅಲ್ಲವೇ? ಕೇವಲ ಕನ್ನಡ ಭಾಷೆಯನ್ನು ಅವಲಂಬಿಸಿದವನಿಗೆ ಯಾವುದೇ ವಿಷಯದ ಬಗ್ಗೆ ಪರಿಪೂರ್ಣ ಜ್ಞಾನ ಸಿಗಲ್ಲ ಎಂದು ಮನದಟ್ಟು ಮಾಡಲು ಪ್ರೇರೇಪಿಸಿದಂತಾಗುತ್ತಿದೆ. ಒಂದು ವೇಳೆ ಅದೇ ಸಿನಿಮಾ ಕನ್ನಡದಲ್ಲಿ ನೋಡಿದರೆ ಅದರಲ್ಲಿನ ಸಂಪೂರ್ಣ ವಿಷಯವಸ್ತು ತಿಳಿಯಲು ಸಾಧ್ಯವಾಗುತ್ತಿರಲಿಲ್ಲವೇ? ಇಲ್ಲಿ ಕನ್ನಡ ಭಾಷೆಯ ಕುರಿತು ಪ್ರೀತಿಯ ಭಾವನೆ ತಾನಾಗಿಯೇ ಬೆಳೆಯುತ್ತಿತ್ತು. ಅದರಲ್ಲಿ ಕನ್ನಡ ಅಳಿಯುವ ಮಾತು ಎಲ್ಲಿಂದ ಬಂತು? ಇದೇ ರೀತಿ ಮುಂದುವರಿದರೆ ಮುಂದೆ ಕನ್ನಡ ಭಾಷೆ ಮೂಲೆಗುಂಪಾಗುವ ಆತಂಕ ಸೃಷ್ಟಿಯಾದಿತು!

   ಡಬ್ಬಿಂಗ್ ವಿರೋಧಿಸಿ ಬಂದ್ ಘೋಷಣೆ ಮಾಡಲು ನಿರ್ಧರಿಸಿರುವ ಮಹಾ ಮಹೀಮರುಗಳು ಕನ್ನಡಿಗರಲ್ಲಿ ಎದ್ದಿರುವ ಪ್ರಶ್ನೆಗಳಿಗೆ ಉತ್ತರಿಸಲಿ.
      
  • ನಿರ್ಮಾಪಕ, ನಿರ್ದೇಶಕರ ಕಾಳಜಿಯನ್ನು ಬಿಟ್ಟು ವೀಕ್ಷಕರಿಗೆ ಏನು ಬೇಕು ಎಂದು ಆಲೋಚಿಸುವುದು ಬೇಡವೇ? 
  • ಇಂದು ಅವತಾರ್, ಎಂದಿರನ್, ಸ್ಪೈಡರ್ ಮ್ಯಾನ್ ನಂತಹ ಹೊಸ ಬಗೆಯ ಚಿತ್ರಗಳನ್ನು ನೋಡಬೇಕೆಂದರೆ ಹಿಂದಿ, ತೆಲುಗು, ತಮಿಳಲ್ಲಿ ನೋಡಬೇಕಾದ ಸ್ಥಿತಿ ಇದೆ ಇಂತಹ ಸಾಲಿನಲ್ಲಿ ಕನ್ನಡವೂ ಇದ್ದರೆ ವಿಶ್ವದ ಎಲ್ಲಾ ಚಿತ್ರಗಳನ್ನು ಸ್ವಂತ ಭಾಷೆಯಲ್ಲಿಯೇ ವೀಕ್ಷಿಸಬೇಕೆಂಬ ಆಸೆ ಇಟ್ಟುಕೊಂಡರೆ ಅದು ತಪ್ಪೆಂದು ಅನಿಸಲು ಕಾರಣವೇನು?
  • ಕನ್ನಡಿಗರು ಬೇರೆ ಭಾಷೆಯ ಚಿತ್ರಗಳನ್ನೇ ಹೆಚ್ಚು ನೋಡುತ್ತಾರೆ ಎಂದು ಗೊಣಗುತ್ತಿರುವ ನೀವು ಅವರಂತೆ ಏಕೆ ಚಿತ್ರಗಳನ್ನು ಮಾಡುವುದಿಲ್ಲ? 
  • ನಾವು ಬೇರೆ ಭಾಷೆಯ ಚಿತ್ರಗಳು ಚೆನ್ನಾಗಿರುತ್ತವೆ ಅನ್ನೋ ಕಾರಣದಿಂದ ನೋಡುತ್ತೇವೆ ಅಂತಹ ಪ್ರಯತ್ನ ನಿಮ್ಮಿಂದೇಕೆ ಆಗದು?
  • ಡಬ್ಬಿಂಗ್ ಒಪ್ಪಿಕೊಂಡಿರುವ ರಾಜ್ಯಗಳಲ್ಲಿ ಆ ಭಾಷೆಗೆ ನಷ್ಟ ಆದ ಉದಾಹರಣೆ ತೋರಿಸುವಿರಾ?


Tuesday, January 21, 2014



ಹುಡುಗರೇ ದೇವದಾಸ್ ಆಗೋದು ಯಾಕೆ ?


      ಒಂದು ಕಾಲಕ್ಕೆ ದೇವದಾಸ ಅನ್ನೋ ಪದಕ್ಕೆ ಬಹಳಷ್ಟು ಬೆಲೆ ಇತ್ತು. ಈ ಹೆಸರು ಕೇಳಿದೊಡನೆ ಗೌರವ ಭಾವನೆ ಮೂಡುತ್ತಿತ್ತು. ರಾಮದಾಸ, ಪುರಂದರದಾಸ, ಗುರುದಾಸ ಇಂತಹ ಹೆಸರುಗಳು ಪಟ ಪಟನೆ ಸ್ಮತಿ ಪಟಲದಲ್ಲಿ ಹಾದು ಹೋಗುತ್ತಿದ್ದವು.
  ಇವಾಗ ಹಾಗಲ್ಲರಿ,,, ದೇವದಾಸ ಎಂದೊಡನೆ ಬಾರ್, ರಮ್ಮು ವಿಸ್ಕಿ ವೋಡ್ಕಾ ಮತ್ತೆ ವಿಶೇಷವಾಗಿ ಬ್ಲೇಡು ಕಾಣದ, ಕೆದರಿದ ಗಡ್ಡ ಕಣ್ಮುಂದೆ ಬರುತ್ತದೆ. ಇವರು ಸಹ ದಾಸರೆ, ವ್ಯತ್ಯಾಸ ಇಷ್ಟೆ ಅವರು ಮನೆ, ಹೆಂಡತಿ ಮಕ್ಕಳನ್ನು ಬಿಟ್ಟು ದಾಸರಾದರೆ ಇವರು ಹುಡುಗಿ ಕೈ ಕೊಟ್ಟದ್ದಕ್ಕಾಗಿ ದಾಸರಾಗಿದ್ದಾರೆ ಅವರು ದೇವರ ದಾಸರಾದರೆ ಇವರು ಸರಾಯಿಯ ದಾಸರಾಗಿರುತ್ತಾರೆ. ಅವರು ಯಾವುದೋ ಮಠವನ್ನು ಕಾವಲು ಮಾಡಿದರೆ ಇವರು ಬಾರ್ ಕಾಯುವುದನ್ನು ಮಾಡುತ್ತಾರೆ.

   ಪ್ರೀತಿಯೊಂದಿದ್ದರೆ ಜಗತ್ತನ್ನೇ ಗೆಲ್ಲಬಹುದೆಂದು ಅಂದು ಗಾಂಧಿ ಹೇಳಿದ್ದರು (ಶಾರುಖ್ ಖಾನ್ ಅನೇಕ ಸಿನೆಮಾಗಳಲ್ಲಿ ಸಾಬೀತು ಮಾಡಿದ್ದಾರೆ) ಪ್ರೀತಿ ಅನ್ನೋ ಒಂದೇ ಒಂದು ವಿಷಯವನ್ನಿಟ್ಟುಕೊಂಡು ವಿಶ್ವವಿಖ್ಯಾತರಾದವರನ್ನು ನೋಡಿದ್ದೇವೆ. ಪ್ರೀತಿಗಾಗಿ ಎಲ್ಲಾವನ್ನು ತ್ಯಾಗ ಮಾಡಿದವರನ್ನು ಸಹ ಕಂಡಿದ್ದೇವೆ ಇಂದು ಇದೇ ಪ್ರೀತಿಗಾಗಿ ನಮ್ಮ ಅನೇಕ ಯುವ ಮಿತ್ರರು ಹೀನಾಯ ಸ್ಥಿತಿಗೆ ತಲುಪಿರುವುದು ಖೇದಕರವಲ್ಲವೇ?

 ನಿಜವಾಗಲೂ ಇದಕ್ಕೆ ಪ್ರೀತಿನೇ ಕಾರಣನಾ?
   
    ಖಂಡಿತವಾಗಿಯೂ ಅಲ್ಲ. ಪ್ರೀತಿ ಕೆರಳಿದ ಜೀವನವನ್ನು ಹೂವಿನಂತೆ ಅರಳಿಸುತ್ತದೆ. ದುಷ್ಟ ವೈರಿಯನ್ನು ಇಷ್ಟದ ಸ್ನೇಹಿತನಾಗಿ ಮಾಡುತ್ತದೆ, ತುಳಿಯುವ ಕಲ್ಲನ್ನು ಬೆಳೆಯುವ ದೇವಾಲಯವನ್ನಾಗಿ ಮಾಡುತ್ತದೆ ಆದರೆ ಪ್ರತಿ ದೇವದಾಸರನ್ನು ಏಕಪ್ಪಾ ಹೀಗಾದೆ ಎಂದು ಕೇಳಿದರೆ ಇದಕ್ಕೆಲ್ಲ ಕಾರಣ ಪ್ರೀತಿ ಅಂತಲೇ ಹೇಳುತ್ತಾರೆ. ಆದರೆ ಎಡವಟ್ಟಾಗಿರೋದು ಎಲ್ಲಿ ಅಂತ ತಿಳಿದುಕೊಳ್ಳುವುದು ಅತಿ ಮುಖ್ಯ.
 ಹರೆಯದಲ್ಲಿ ಲೈಂಗಿಕ ಕಾಮನೆ ಮತ್ತು ದೈಹಿಕ ಆಕರ್ಷಣೆಗಳಿರುವುದು ಸಹಜ. ಅದೇ ಈ ಸಮಯದಲ್ಲಿ ಸಾಮಾನ್ಯವಾಗಿ ಸ್ನೇಹಿತೆ (ಲವರ್) ಹೊಂದಬೇಕೆಂಬ ಆಸೆ ಎಲ್ಲ ಹುಡುಗರಲ್ಲಿಯೂ ಇದ್ದೇ ಇರುತ್ತದೆ ಅದರಂತೆ ಹುಡುಕಾಟ ಆರಂಭಿಸುತ್ತಾರೆ. ಇಂದಿನ ಕಾಲದಲ್ಲಿ ಹುಡುಗಿಯರಿಗೇನು ಕೊರತೆಯಿಲ್ಲ ಆದರೆ ಒಳ್ಳೇ ಹುಡುಗಿ ಸಿಗಬೇಕಲ್ಲವೇ? ನಿಜವಾಗಲೂ ಎಡವಟ್ಟಾಗೋದು ಇಲ್ಲಿಯೆ.

  ಕಲರ್ ಕಲರ್ ಮ್ಯಾಚಿಂಗ್ ಡ್ರೆಸ್‍ಗಳನ್ನು ಧರಿಸಿ, ಮಾರ್ಕೆಟ್‍ನಲ್ಲಿ ಇದ್ದ ಎಲ್ಲಾ ಸೌಂದರ್ಯವರ್ಧಕಗಳನ್ನೂ(ಕಾಸ್ಮೆಟಿಕ್ಸ್) ಮುಖಕ್ಕೆ ಪೂಸಿಕೊಂಡು ಸುಂದರಾತಿ ಸುಂದರಳು ಎನ್ನುವಂತೆ ಫೋಸು ಕೊಡುವ ಹುಡುಗಿರನ್ನು ಕಂಡಾಗ ಇಂಥ ಹುಡುಗಿ ನನ್ನವಳಾಗಿದ್ದರೆ ಚೆನ್ನಾಗಿರುತ್ತದೆ ಎನ್ನುವ ಆಲೋಚನೆ ಎಲ್ಲರದ್ದು ಅದರಂತೆ ಅವಳು ಹೋದಲ್ಲೆಲ್ಲ ಅಲೆದು ಅವಳನ್ನು ಪಟಾಯಿಸಲು ವಿಧ ವಿಧದ ಸರ್ಕಸ್ ಮಾಡಲು ಆರಂಭಿಸುತ್ತಾರೆ ಇದನ್ನೇ ಕಾಯುವ ಅವಳು ಸುಮ್ಮನೆ ಬಿಡುತ್ತಾಳಾ? ಯಾವುದಾದರೂ ಕೆಲಸಕ್ಕೆ ಬರುತ್ತಾನೆ ಅಂದುಕೊಂಡು ಗೆಳೆತಿಯಂತೆ ನಟಿಸಲು ಆರಂಭಿಸುತ್ತಾಳೆ, ನೀನಿಲ್ಲದೆ ಜೀವನವೇ ಇಲ್ಲ ಅನ್ನೋ ತರ ಆಡುತ್ತಾಳೆ. ಒಂದು ದಿನ ಆ ಕಾಲ ಬಂದೇ ಬಿಡುತ್ತದೆ ಬಹಳ ದಿನಗಳಿಂದ ಚಾತಕ ಪಕ್ಷಿಯಂತೆ ನೀವು ಕಾಯುತ್ತಿರುವ love u to
ಅನ್ನೋ ಉತ್ತರ ಬಂತೆಂದರೆ ಸಾಕು ಇಹಲೋಕದ ಸುಂದರ ಸ್ವರ್ಗದಂತೆ ಕಾಣುವ ನಾಟಕೀಯ ಪ್ರೀತಿಯ ಬರಡು ಪ್ರಪಾತಕ್ಕೆ ಬಿದ್ದಂತೆಯೆ.
   ಮೊಬೈಲ್ ಕರೆನ್ಸಿ, ಸ್ಪೆಷಲ್ ಕಾಲ್‍ರೇಟ್ ಪ್ಯಾಕು, ಬರ್ಥಡೇ ಗಿಫ್ಟು ಅಂತ ಇದ್ದ ಎಲ್ಲವನ್ನು ಕಳೆದುಕೊಂಡ ಮೇಲೆ ಅಂತು ಇಂತು ಆ ಸುಂದರಿಯನ್ನು ಪಡೆದೆನಲ್ಲ ಅನ್ನೋ ಖುಷಿಯಲ್ಲಿ ಅಪ್ಪನು ತಂದಿಟ್ಟಿದ್ದ ಮೆತ್ತನೆ ಸೋಫಾದ ಮೇಲೆ ಒರಗಿಕೊಂಡು ಯಾವ ಸೀನಿಮಾಗು ಕಮ್ಮಿಯಿಲ್ಲ ಅನ್ನುವಂತೆ ಮುಂದಿನ ಜೀವನ ಅವಳ ಜೊತೆ ಹೇಗಿರಬೇಕೆಂಬ ಸುಂದರ ಕನಸನ್ನು ಕಾಣುತ್ತಿರುವಾಗ ಎಲ್ಲಿಂದಲೋ ಫೋನು ರಿಂಗಣಿಸುವ ಶಬ್ದವಾದಂತಾಗಿ ಎಚ್ಚರಗೊಂಡು ಕಣ್ಣುಗಳನ್ನು ವರೆಸಿಕೊಳ್ಳುತ್ತಾ ಓ ನಂದೆ ಅರೆ! ಅವಳೆ! ಅವಳಿಗೆ ಸಾವೆ ಇಲ್ಲ ನೂರು ಕಾಲ ಬದುಕುತ್ತಾಳೆ ಎಂದು ಯಾವಾಗಲೋ ಹೇಳಿದ ಅಜ್ಜನ ಮಾತುಗಳ ನೆನಪು ಬೇರೆ ಹಾಗೆಯೆ ಮೆತ್ತಗೆ ರಿಸೀವ್ ಬಟನ್ ಅದುಮಿ ಫೋನ್ ಕಿವಿಗೆ ತಾಗಿಸಿದಾಗ ಅಹಾ! ಅದೇ ಸುಮಧುರ ಕಂಠದಿಂದ "sorry ಇನ್ಮುಂದೆ ಭೇಟಿಯಾಗಕ್ಕಾಗಲ್ಲ, ನಮ್ಮ ಡ್ಯಾಡಿ ಎಂಗೇಜ್‍ಮೆಂಟ್ ಫಿಕ್ಸ್ ಮಾಡಿದ್ದಾರೆ ಪ್ಲೀಸ್ ಇನ್ಮುಂದೆ ಕಾಲ್ ಮಾಡಲು ಪ್ರಯತ್ನಿಸಬೇಡ” ಅನ್ನೋ ಮಾತು ಕೇಳಿದೊಡನೆ ಅಘಾತವಾದಂತಾಗಿ ಎನ್...ಎನ್...ಎನ್..! ಅನ್ನುವಷ್ಟರಲ್ಲಿಯೇ ಕಾಲ್ ಕಟ್ ಆಗಿರುತ್ತೆ ಮುಂದೆ ಏನಾಗುತ್ತೆ ಅನ್ನೋದು ಅಂದಾಜಿಸಬಹುದು ನೀವಂದುಕೊಂಡಂತೆ ಕಣ್ಣಿಗೆ ಬಿದ್ದ ಹುಡುಗಿಯರನ್ನೆಲ್ಲಾ ದ್ವೇಷಿಸುತ್ತಾ, ಅದೇ ಕಿತ್ತೋಗಿರೋ ಹಳೆ ಹ್ಯಾಂಡ್ ಸೆಟ್‍ನಲ್ಲಿ love ಫೀಲಿಂಗ್ ಸಾಂಗ್ ಕೇಳುತ್ತಾ ಆಗಿಯೇ ಬಿಟ್ಟ ದೇವದಾಸ.

 ಈ ವಯಸ್ಸಲಿ ಯುವಕರು ತನ್ನ ಭವಿಷ್ಯ ರೂಪಿಸಿಕೊಳ್ಳೊದಲ್ಲದೇ ದೇಶದ ಭವಿಷ್ಯದ ಕನಸ್ಸನ್ನು ಕಾಣುವ ಬದಲು ಯಾವುದೋ ಆಕರ್ಷಣೆಗೆ ಒಳಗಾಗಿ ಸಂಗಾತಿ ಹುಡುಕುವ ಆತುರದಲ್ಲಿ ತೆಗೆದುಕೊಂಡ ತಪ್ಪು ನಿರ್ಣಯದಿಂದ ಮನೆಯವರಿಂದ, ಸಮಾಜದಿಂದ ತಿರಸ್ಕøತರಾಗಿ ಅವರ ಇಡೀ ಜೀವನವೇ ನರಕವನ್ನಾಗಿ ಮಾಡಿಕೊಳ್ಳುತ್ತಾರೆ.
  ಹಾಗಂತ ಎಲ್ಲಾ ಹುಡುಗಿಯರು ಕೆಟ್ಟವರು ಎಂದು ಹೇಳೋಕಾಗಲ್ಲ. ಕೆಲ ಹುಡುಗಿಯರ ಅಪಕೃತ್ಯದಿಂದ ಪ್ರೀತಿ ಅನ್ನೋ ಹೆಸರಿನ ಜೊತೆಗೆ ಎಲ್ಲಾ ಹುಡುಗಿಯರ ಮೇಲೆ ಕಳಂಕ ಬರುತ್ತಿದೆ.
  
 ‘ದೇವದಾಸ’ ದಿಂದ ಮುಕ್ತಿ ಸಾಧ್ಯನಾ ?
  
   ಇಂತಹ ದೇವದಾಸರನ್ನು ಕಂಡ ಗೆಳೆಯರು ಪ್ರೀತಿ ಎಂಬ ಪದ ಕೇಳಿದೊಡನೆ ಬೇಡಪ್ಪೋ ಬೇಡ ಅನ್ನೋ ಮಿತ್ರರು ಎಲ್ಲಾ ಹುಡುಗಿಯರನ್ನು ದ್ವೇಷಿಸಲು ಆರಂಭಿಸುತ್ತಾರೆ. ಆದರೆ ಪ್ರೀತಿಸದೇ ಇರೋಕ್ಕಾಗಲ್ಲ ಪ್ರತಿಯೊಬ್ಬರ ಜೀವನಕ್ಕೆ ಪ್ರೇಮ ಅತ್ಯಗತ್ಯ ಅದಕ್ಕೆ ಪರಿಹಾರ ವಿಲ್ಲವೇ ಅನ್ನೋ ಪ್ರಶ್ನೆ ಮೂಡುತ್ತದೆ ಹಾಗಾದರೆ ಇಲ್ಲಿ ಕೆಳಿ,

  ದುಡುಕೇ ಕೆಡುಕಿನ ಮೂಲ ಎನ್ನುವಂತೆ ಯಾವತ್ತು ದುಡಕದಿರಿ, ಲೇಟ್ ಆದರೂ ಚಿಂತೆಯಿಲ್ಲ ಲೇಟೆಸ್ಟ್ ಆಗಿರೋ, ಮನಸ್ಸಿನಿಂದ ಸುಂದರವಾಗಿರೋ ಗೆಳತಿಯನ್ನು ಆರಿಸಿಕೊಳ್ಳಿರಿ. if choice is right future will be bright.