Friday, February 27, 2015

ಅನೇಕರಲ್ಲಿ ಜೀವನದಲ್ಲಿ ಏನಾದರೊಂದು ಮಹಾನ್ ಸಾಧನೆ ಮಾಡಬೇಕು ಅಂತ ಆಲೋಚನೆ ಇರುತ್ತೆ. ಅದಕ್ಕಾಗಿ ಗಂಭೀರ ಪ್ರಯತ್ನವೂ ನಡೆಯುತ್ತೆ. ಆದ್ರೆ ಕೆಲವೊಮ್ಮೆ ಚಿಕ್ಕ ಪುಟ್ಟ ಸಮಸ್ಯೆಗಳೂ ಹಿಂದೆ ಸರಿಯುವಂತೆ ಮಾಡುತ್ತವೆ. ಅಂತಹದ್ದೇನಾದರೂ ಅನುಭವ ಆದ್ರೆ... ಇಲ್ಲಿ ಕ್ಲಿಕ್ ಮಾಡಿ ... ಸಂಪೂರ್ಣ ಚಿತ್ರ ನೋಡಿ. 

Saturday, February 14, 2015


  • ಪದ್ಮನಾಭ ದೇವಸ್ಥಾನದ 266 ಕೇಜಿ ಚಿನ್ನ ಗಾಯಬ್...
  • ಚಿನ್ನ ಶುದ್ಧೀಕರಿಸಲು ಒಯ್ದಷ್ಟು ಚಿನ್ನ ವಾಪಸ್ಸು ಬರಲೇ ಇಲ್ಲ..

ತಿರುವನಂತಪುರಮ್ನಲ್ಲಿರೋ ಪದ್ಮನಾಭ ಸ್ವಾಮಿ ದೇವಾಲಯದಿಂದ 266 ಕೆಜಿ ಚಿನ್ನ ನಾಪತ್ತೆಯಾಗಿದೆ. ದೇವಾಲಯದಲ್ಲಿರುವ 893 ಕೆಜಿ ಚಿನ್ನ ಶುದ್ಧೀಕರಿಸಲು ಖಾಸಗಿ ಗುತ್ತಿಗೆದಾರನಿಗೆ ನೀಡಲಾಗಿತ್ತು. ಆದ್ರೆ ಮರಳಿ ವಾಪಸ್ಸು ಬಂದಿದ್ದು ಮಾತ್ರ 637 ಕೆಜಿ ಚಿನ್ನ ಮಾತ್ರ. ಕೇಂದ್ರದ ಮಾಜಿ ಆಡಿಟರ್ ಜನರಲ್ ಈ ಕುರಿತು ಸುಪ್ರೀಂ ಕೋರ್ಟಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.. ಇಲ್ಲೊಂದು ದೊಡ್ಡ ಗೋಲ್ಮಾಲ್ ನಡೆದಿದೆ ಅನ್ನೋದು ಮಾತ್ರ ಮೇಲ್ನೋಟದಿಂದಲೇ ತಿಳಿಯುತ್ತೆ. ಹಾಗಾಗಿ ಆದಷ್ಟು ಬೇಗ ಪತ್ತೆ ಮಾಡಬೇಕಾಗಿದೆ.